You are currently browsing the tag archive for the ‘History’ tag.
ಭಾರತೀಯರಿಗೆ ಇತಿಹಾಸ ಪ್ರಜ್ಞೆ ಕಡಿಮೆ ಎಂಬ ಒಂದು ಆರೋಪ ಆಗೀಗ ಕೇಳಿ ಬರುತ್ತದೆ. ಆದರೆ ಮಹಾಭಾರತದಂತಹ ಕಾವ್ಯವನ್ನು ಇತಿಹಾಸ ಎಂದು ಕರೆದಿರುವಾಗ, ಪುರಾಣಗಳಲ್ಲಿ ರಾಜರ ವಂಶಾವಳಿಗಳನ್ನು ಹೇಳಿರುವ ಸಂದರ್ಭಗಳನ್ನು ನೋಡಿದಾಗ, ಈ ಮಾತು ಪೂರ್ತಿ ಸರಿಯಲ್ಲ ಎಂಬುದು ಮನದಟ್ಟಾಗುತ್ತದೆ. ಇಲ್ಲಿ ಗಮನಿಸಬೇಕಾದ ಒಂದು ವಿಶೇಷವೆಂದರೆ ಐತಿಹಾಸಿಕ ಸಂಗತಿಗಳು ಭಾರತೀಯ ಕಾವ್ಯಗಳಲ್ಲಿ ಬರೀ ಘಟನೆಗಳ ಸರಮಾಲೆಯಾಗಿರದೇ, ಕಥಾಸಂದರ್ಭಕ್ಕೆ ಹೊಂದಿಕೊಂಡು ಬರುವುದು. ಇದರ ಜೊತೆಗೆ, ಪೂರ್ತಿ ಕಾಲ್ಪನಿಕವಾದ ಕಥೆಯಾಗಿದ್ದರೂ ಅದರಲ್ಲಿ ಕವಿಯ ಅನುಭವಗಳು, ಆತನ ಅಥವಾ ಆಕೆಯ ಬರವಣಿಗೆಯಲ್ಲಿ ಕಂಡು ಬರುವುದೂ ತಿಳಿದ ವಿಷಯವೇ. ಕಾಳಿದಾಸನ ಮೇಘದೂತದಲ್ಲಿ ಬರುವ ಉಜ್ಜಯನೀ ನಗರದ ವರ್ಣನೆ, ಮೃಚ್ಛಕಟಿಕ ನಾಟಕದಲ್ಲಿ ಬರುವ ಉಜ್ಜಯನೀ ವರ್ಣನೆಗಳನ್ನು ನಾವು ಇಲ್ಲಿ ಉದಾಹರಣೆಗೆ ತೆಗೆದುಕೊಳ್ಳಬಹುದು. ಕಾಳಿದಾಸನ ರಘುವಂಶದಲ್ಲಿ ಬರುವ ದಿಗ್ವಿಜಯಗಳೂ ಕೂಡ ಆತನು ನೋಡಿದ್ದಿರಬಹುದಾದ (ಅಥವಾ ಅವನ ಸಮಯಕ್ಕೆ ಹತ್ತಿರವಾಗಿದ್ದ) ಸಮುದ್ರಗುಪ್ತನ ದಿಗ್ವಿಜಯದಿಂದ ಪ್ರೇರಿತವೆನ್ನಲಾಗಿದೆ. ಇನ್ನು ಕರ್ನಾಟಕದವನೇ ಆದ ಬಿಲ್ಹಣನ ವಿಕ್ರಮಾಂಕದೇವಚರಿತ, ಕಲ್ಹಣನ ರಾಜತರಂಗಿಣಿ ಮೊದಲಾದುವುಗಳೂ ಒಂದು ಮಟ್ಟಿಗೆ ರಾಜರ ಇತಿಹಾಸದ ವಿವರಗಳನ್ನು ಕೊಡುವ ಕಾವ್ಯಗಳೇ.
ಇವೆಲ್ಲ ರಾಜಮಹಾರಾಜರ ಕಥೆಗಳಾದುವು. ಆದರೆ, ಜನಸಾಮಾನ್ಯರ ಜೀವನ ಚಿತ್ರಗಳನ್ನೂ ನಮಗೆ ತೋರುವಂತಹ ಕಾವ್ಯಗಳೂ ಇರುವುದು ಒಂದು ಸಮಾಧಾನ ತರುವ ಸಂಗತಿ. ಇಂತಹ ಕಾವ್ಯಗಳಲ್ಲಿ ಒಂದು ಅಮರುಕ ಕವಿಯ ಅಮರುಶತಕ ಅಥವಾ ಅಮರುಕಶತಕ. ಇದು ಸಾಮಾನ್ಯ ಜನಗಳ ಜೀವನದಲ್ಲಿರುವಂತಹ ಪ್ರೀತಿ ಪ್ರೇಮಗಳ ಹಲವು ಚಿತ್ರಗಳನ್ನು ಕೊಡುವಂತಹ ಒಂದು ಮುಕ್ತಕ ಕಾವ್ಯ. ಮುಕ್ತಕ ಕಾವ್ಯವೆಂದರೆ ಇದರಲ್ಲಿ ಪ್ರತಿಯೊಂದು ಪದ್ಯವನ್ನೂ ತಂತಾನೇ ಸ್ವಯಂಪೂರ್ಣ. ಒಂದೇ ಪದ್ಯವನ್ನು ಓದಿದರೂ, ಅದು ಒಂದು ಪೂರ್ಣ ಅನುಭವವನ್ನು ಕೊಡುತ್ತದಾದ್ದರಿಂದ ಈ ಹೆಸರು, ಮುತ್ತು ಒಂಟಿಯಾಗಿದ್ದರೂ, ಸರವಾಗಿ ಕೋದರೂ ಅದು ಸೊಗಸೇ ತಾನೇ? ಹಾಗಾಗಿ ಇಂತಹ ಕಾವ್ಯಗಳಿಗೆ ಈ ಹೆಸರು ಬಹಳ ಒಪ್ಪುತ್ತದೆ. ಅಮರುಕನ ಒಂದೊಂದು ಪದ್ಯವೂ ನೂರು ಕಾವ್ಯಗಳ ರಸಾನುಭವವನ್ನು ಕೊಡುತ್ತದೆಂದು ಅವನ ನಂತರದ ಲಾಕ್ಷಣಿಕರು ಹೇಳಿರುವುದುಂಟು. ಗಂಡು ಹೆಣ್ಣಿನ ನಡುವಿನ ನವಿರಾದ ಪ್ರೇಮ ವಿರಹ ದುಗುಡ ಮೊದಲಾದ ಎಲ್ಲ ಭಾವನೆಗಳನ್ನು ಚಿತ್ರಿಸುವುದರಲ್ಲಿ ಅಮರುಕನಿಗೆ ಅವನೇ ಸಾಟಿ.
ಅಮರುಕನ ಬಗ್ಗೆ ನಮಗೆ ತಿಳಿದಿರುವುದು ಕಡಿಮೆಯೇ. ಈತ ಎಂಟನೇ ಶತಮಾನದಲ್ಲಿದ್ದನೆಂಬುದು ಖಚಿತವಾಗಿ ಹೇಳಬಹುದಾದ ವಿಷಯ. ಈಗ ಕಾಶ್ಮೀರದ ರಾಜನೆಂದೂ, ಮಾಹಿಷ್ಮತಿಯ ರಾಜನೆಂದೂ ದಂತ ಕಥೆಗಳಿವೆ. ಇವನು ಅಮರುಶತಕ ವೆಂಬ ಹೆಸರಿನಲ್ಲಿ ಪ್ರಖ್ಯಾತವಾಗಿರುವ ಒಂದು ನೂರು ಪದ್ಯಗಳನ್ನು ಸಂಸ್ಕೃತದಲ್ಲಿ ಬರೆದಿದ್ದಾನೆ. ಈ ಪದ್ಯಗಳ ವಿಷಯವೆಂದರೆ ಗಂಡು ಹೆಣ್ಣಿನ ನಡುವಿನ ಪ್ರೇಮ. ಅಮರುಕನ ಒಂದೊಂದು ಬಿಡಿಪದ್ಯವೇ ಒಂದೊಂದು ಕಾವ್ಯದಷ್ಟು ರಸವತ್ತಾಗಿರುತ್ತದೆಂದು ನಂತರದ ಕವಿಗಳು, ವಿಮರ್ಶಕರು ಹೊಗಳಿದ್ದಾರೆ. ಈಗ ದೊರಕಿರುವ ಬೇರೆ ಬೇರೆ ಅಮರುಕ ಶತಕದ ಟೀಕೆಗಳಲ್ಲಿ, ಮತ್ತೆ ಇತರ ಕಾವ್ಯಗಳಲ್ಲಿ ಅಮರುಕನ ಹೆಸರಲ್ಲಿ ಕೊಟ್ಟಿರುವ ಪದ್ಯಗಳನ್ನೂ ಸೇರಿಸಿದರೆ, ಶತಕವೆಂದರೆ ನೂರು ಪದ್ಯವಿರಬೇಕಾದರೂ ಸುಮಾರು ೧೬೦ ಪದ್ಯಗಳು ಅಮರುಕನದ್ದೆಂದು ಬಳಕೆಯಲ್ಲಿವೆ. ಅಮರುಕನ ಪದ್ಯಗಳು ಅವುಗಳ ಲಾಲಿತ್ಯಕ್ಕೆ ಹೆಸರುವಾಸಿ.
ಈತನ ಬಗ್ಗೆ ಇನ್ನೊಂದು ಕಥೆಯೂ ಇದೆ. ಮಂಡನಮಿಶ್ರರ ಹೆಂಡತಿ ಉಭಯಭಾರತಿಯ ಜೊತೆ ಆದಿಶಂಕರರ ವಾದ ನಡೆಯುತ್ತಿದ್ದಾಗ ಆಕೆ ಸಾಂಸಾರಿಕ ಜೀವನದ ಬಗ್ಗೆ ಪ್ರಶ್ನೆ ಮಾಡಲು, ಬಾಲ ಸನ್ಯಾಸಿಯಾಗಿದ್ದ ಶಂಕರರು ತಮ್ಮ ಅನುಭವದಿಂದಲೇ ಆ ಪ್ರಶ್ನೆಗೆ ಉತ್ತರಿಸಬೇಕೆಂದು, ಅಕಾಲದಲ್ಲಿ ಸತ್ತು ಹೋಗಿದ್ದ ಅಮರುಕ ರಾಜನ ದೇಹದಲ್ಲಿ ಪರಕಾಯ ಪ್ರವೇಶಮಾಡಿದ್ದರೆಂದೂ, ಆ ಸಮಯದಲ್ಲಿ ಅವರು ಬರೆದ ಪದ್ಯಗಳೇ ಈ ಅಮರುಶತಕವೆಂದೂ ಕೆಲವು ಶಂಕರ ವಿಜಯ ಕಾವ್ಯಗಳು ಹೇಳುತ್ತವೆ. ಇವುಗಳನ್ನು ಅತಿಶಯೋಕ್ತಿಯೆಂದೆನ್ನಬಹುದೇ ಹೊರತು, ಇವುಗಳಿಗೆ ಸತ್ಯವನ್ನು ಆರೋಪಿಸಬೇಕಾಗಿಲ್ಲ.
ಈ ಕಥೆ ಹಾಗಿರಲಿ. ಆದರೆ ಅಮರುಕ ಶತಕದಲ್ಲಿರುವ ಪದ್ಯಗಳಿಂದ ಸುಮಾರು ೮ನೇ ಶತಮಾನದಲ್ಲಿದ್ದ ಜನಜೀವನವನ್ನು ನಾವು ಸ್ವಲ್ಪ ಮಟ್ಟಿಗೆ ಅರಿತುಕೊಳ್ಳಬಹುದು ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆ ಕಾಲದಲ್ಲಿ ಭಾರತದಲ್ಲಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವ್ಯಾಪಾರಿಗಳ ತಂಡಗಳು “ಸಾರ್ಥ”ಗಳಲ್ಲಿ ಹೋಗುತ್ತಿದ್ದು ದೇಶಾಂತರ ವ್ಯಾಪಾರವನ್ನು ಮಾಡುತ್ತಿದ್ದವು. ಈ ರೀತಿಯ ತಂಡಗಳು ಭಾರತದಿಂದ ಹೊರದೇಶಗಳಿಗೂ ಹೋಗುತ್ತಿದ್ದುದುಂಟು. ಇಂತಹ ಸಾರ್ಥದಲ್ಲಿ ವ್ಯಾಪಾರಕ್ಕೆ ಹೋದವರು ತಮ್ಮ ಊರಿಗೆ ಮರಳುವುದಕ್ಕೆ ಹಲವಾರು ತಿಂಗಳುಗಳಾಗುತ್ತಿದ್ದವು. ಇಂತಹ ಸಂದರ್ಭದಲ್ಲಿ ಪತಿ ಪತ್ನಿಯರು ಒಬ್ಬರಿಂದೊಬ್ಬರು ದೂರವಾಗಿ, ಆ ವಿರಹದಿಂದ ಬಳಲುವ ಹಲವು ಚಿತ್ರಗಳನ್ನು ಅಮರುಕ ಶತಕದಲ್ಲಿ ಚಿತ್ರಿಸಿರುವುದನ್ನು ಕಾಣಬಹುದು. ನಾನು ಮಾಡಿರುವ ಅಮರುಕ ಶತಕದ ಅಂತಹ ಕೆಲವು ಪದ್ಯಗಳ ಅನುವಾದ, ಟಿಪ್ಪಣಿಯೊಂದಿಗೆ ಇಲ್ಲಿದೆ:
ಮೊದಲು, ಸಾರ್ಥದಲ್ಲಿ ಊರಿಂದ ಹೊರಹೋಗಿರುವವನೊಬ್ಬನ ಹೆಂಡತಿಯ ಪಾಡು ನೋಡಿ.
ತೊಟ್ಟ ಬಳೆಗಳು ಕೈಯ ತೊರೆದಿವೆ ಕಣ್ಣ ನೀರದು ಸುರಿದಿದೆ
ಧೈರ್ಯ ಚಣದಲೆ ಮಾಯವಾದುದೆ ಮನಸು ದೂರಕೆ ಓಡಿದೆ
ಗಟ್ಟಿ ಮನದಲೆ ನಲ್ಲ ತೆರಳಿರೆ ಜೊತೆಯಲೇ ಇವರೆಲ್ಲರೂ
ಹೊರಟು ಹೋದರೆ ಜೀವ ಗುಂಪನ್ನುಳಿದು ಉಳಿದಿಹೆಯೇತಕೆ?
ಸಂಸ್ಕೃತ ಮೂಲ:
ಪ್ರಸ್ಥಾನಂ ವಲಯೈಃ ಕೃತಂ ಪ್ರಿಯಸಖೈರಸ್ರೈರಜಸ್ರಂ ಗತಂ
ಧೃತ್ಯಾ ನ ಕ್ಷಣಮಾಸಿತಂ ವ್ಯವಸಿತಂ ಚಿತ್ತೇನ ಗಂತುಂ ಪುರಃ
ಗಂತುಂ ನಿಶ್ಚಿತಚೇತಸಿ ಪ್ರಿಯತಮೇ ಸರ್ವೇ ಸಮಂ ಪ್ರಸ್ಥಿತಾ
ಗಂತವ್ಯೇ ಸತಿ ಜೀವಿತಪ್ರಿಯ ಸುಹೃತ್ಸಾರ್ಥಃ ಕಿಮುತ್ಯಜ್ಯತೇ ॥
ಈ ನಾಯಕಿ ತನ್ನ ಪ್ರಿಯತಮ ಇನ್ನೂ ಊರಿಗೆ ಬಂದಿಲ್ಲ ಎಂದು ಎಷ್ಟು ಸೊರಗಿದ್ದಾಳೆಂದರೆ ಕೈಯಲ್ಲಿ ತೊಟ್ಟ ಬಳೆಗಳು ಜಾರಿಹೋಗಿವೆ. ಕಣ್ಣೀರು ಒಂದೇ ಸಮ ಸುರಿದಿದೆ. ಧೈರ್ಯವೂ ಮನಸ್ಸಿಂದ ದೂರವಾಗಿದೆ. ಇದನ್ನು ನೋಡಿದ ಆ ನಾಯಕಿ, “ಹೇ ಜೀವ, ನಿನ್ನ ಗೆಳೆಯರಾದ ಧೈರ್ಯ, ಕಣ್ಣೀರು ಎಲ್ಲವೂ ನನ್ನ ಬಿಟ್ಟು ದೂರ ಹೋದಮೇಲೆ, ಅವುಗಳ ’ಸಾರ್ಥ’ವನ್ನು ನೀನೇಕೆ ಬಿಟ್ಟೀಯ? ನೀನೂ ಹೊರಟುಹೋಗು ಎಂದು ಹೇಳುತ್ತಿದ್ದಾಳೆ.
ಈಗ ಇನ್ನೊಬ್ಬಳ ಸ್ಥಿತಿ ನೋಡೋಣ. ಇನ್ನೇನು ಮಳೆಗಾಲ ಬರುತ್ತಿದೆ. ವ್ಯಾಪಾರಕ್ಕೆಂದು ಹೋದ ಗಂಡ ಇಂದೋ ನಾಳೆಯೋ ಬರುತ್ತಾನೆಂಬ ನಿರೀಕ್ಷೆ ಇವಳದು. ಹಾಗಾಗಿ ಇವಳಿಗೆ ಮನೆಯೊಳಗೆ ನಿಲ್ಲಲೂ ಮನಸ್ಸಿಲ್ಲ. ಹೊರಗೇ ದಾರಿಯಲ್ಲಿ ನಿಂತು ಕಾಯುವಾಗ ರಾತ್ರಿಯಾದರೂ ಒಳಬರಲು ಮನಸ್ಸಿಲ್ಲ:
ಕಣ್ಣು ತೋರುವವರೆಗು ನಲ್ಲನಾ ಹಾದಿಯನೆ ಕಾಯ್ತು ಬೇಸತ್ತಾಗಲೆ
ದಾರಿಗರ ಸಪ್ಪಳವು ನಿಲ್ಲುತಿರೆ ಹೊರಗೆಲ್ಲ ಹಬ್ಬುತಿರೆ ಕಾರ್ಗತ್ತಲೆ
ಹೆಣ್ಣಿವಳು ಮನೆಯೆಡೆಗೆ ತಿರುಗುತ್ತ ಹಾಕಿರಲು ಹೆಜ್ಜೆಯೊಂದನ್ನಾಕಡೆ
ಕೂಡಲೆಯೆ ಬಂದನೇನೋಯೆನುತ ಕತ್ತನ್ನು ಮೆಲ್ಲ ಹೊರಳಿಸಿ ನೋಳ್ಪಳೆ
ಸಂಸ್ಕೃತ ಮೂಲ:
ಆದೃಷ್ಟಿ ಪ್ರಸರಾತ್ ಪ್ರಿಯಸ್ಯ ಪದವೀಂ ಉದ್ವೀಕ್ಷ್ಯ ನಿರ್ವಿಣ್ಣಯಾ
ವಿಚ್ಛಿನ್ನೇಶು ಪಥಿಶ್ವಃ ಪರಿಣತೌ ಧ್ವಾಂತೇ ಸಮುತ್ಸರ್ಪತಿ |
ದತ್ತೈಕಂ ಸಶುಚಾ ಗೃಹಂ ಪ್ರತಿ ಪದಮ್ ಪಾಂಥಃ ಸ್ತ್ರಿಯಾಸ್ಮಿನ್ ಕ್ಷಣೇ
ಮಾ ಭೂದಾಗತ ಇತ್ಯಾಮಂದವಲಿತಗ್ರೀವಂ ಪುನರ್ವೀಕ್ಷಿತಂ ||
ವ್ಯಾಪಾರಕ್ಕೆಂದು ಪ್ರಯಾಣಕ ಹೋದ ಪತಿ ಇಂದು ಬಂದೇ ಬಿಡಬಹುದೆಂದು ಅವಳು ಹಾದಿಯಲ್ಲೇ ನಿಂತು ಕಾಯುತ್ತಿದ್ದಾಳೆ. ಕತ್ತಲಾಗುತ್ತಿದೆ. ರಸ್ತೆಯಲ್ಲಿ ಓಡಾಡುವರೂ ಕಡಿಮೆಯಾಗುತ್ತಿದ್ದಾರೆ. ಇವಳು ನಿರಾಸೆಯಿಂದ ಮನೆಯ ಕಡೆಗೆ ಒಂದು ಹೆಜ್ಜೆ ಹಾಕಿದ ಕೂಡಲೆ, ಮತ್ತೆ ಅದೇ ಕ್ಷಣದಲ್ಲೇ ಆತ ಬಂದೇ ಬಿಟ್ಟ ನೇನೋ ಎಂದು ಮತ್ತೆ ತಿರುಗಿ ನೋಡಿದಳಂತೆ!
ಈ ಮೊದಲಿನ ಇಬ್ಬರೂ ನಾಯಕಿಯರು, ಪ್ರೇಮಿ ದೂರ ಹೋದ ಮೇಲೆ ಸೊರಗಿದವರು. ಕೊರಗಿದವರು. ಆದರೆ ಈಗ ಇನ್ನೊಬ್ಬಳ ಕಥೆ ನೋಡಿ. ಇವಳು ಅದೆಷ್ಟು ಕೋಮಲೆಯೆಂದರೆ, ಗಂಡ ಊರಿಗೆ ಹೊರಟನೆಂದರೆ ತಾನು ಮುಂದೆ ಬದುಕುವುದೇ ಅವಳಿಗೆ ಅನುಮಾನ
ಪಯಣ ಹೋದರೆ ಮತ್ತೆ ಬಾರದೆ ಇರುವುದುಂಟೇ ಸುಂದರಿ?
ಎನ್ನ ಸಲುವಿಗೆ ಚಿಂತೆಯೇತಕೆ? ಏತಕೀಪರಿ ಸೊರಗಿಹೆ?
ಒದ್ದೆಗಣ್ಣಲಿ ನಾನು ಕೇಳಲು ನಾಚಿ ತುಂಬಿದ ಕಣ್ಗಳ
ನೀರ ತಡೆದಳು! ನೋಡಿ ನಕ್ಕಳು! ತೋರಿ ಸಾವಿಗೆ ಕಾತರ!
ಸಂಸ್ಕೃತ ಮೂಲ:
ಯಾತಾಃ ಕಿಂ ನ ಮಿಲಂತಿ ಸುಂದರಿ ಪುನಶ್ಚಿಂತಾ ತ್ವಯೇ ಮತ್ಕೃತೇ
ನೋ ಕಾರ್ಯಾ ನಿತರಾಂ ಕೃಶಾಸಿ ಕಥಯತ್ಯೇವಂ ಸಬಾಷ್ಪೇ ಮಯಿ
ಲಜ್ಜಾಮಾಂಥರತಾರಕೇಣ ನಿಪತತ್ಪೀತಾಶ್ರುಣಾಂ ಚಕ್ಷುಷಾ
ದೃಷ್ಟ್ಚಾ ಮಾಂ ಹಸಿತೇನ ಭಾವಿಮರಣೋತ್ಸಾಹಸ್ತಯಾ ಸೂಚಿತಃ ||
ಇವಳು ತನ್ನ ಮಾತನ್ನು ಬಾಯಿ ಬಿಟ್ಟು ಹೇಳಲಾರಳು. ಕಣ್ಣೀರನ್ನೂ ತೋರಿಸದೇ ಅದನ್ನು ಸುಳ್ಳು ನಗೆಯಲ್ಲಿ ಮುಚ್ಚಲು ಇವಳಿಂದಾದರೂ, ಅವಳ ಕಣ್ಣುಗಳಲ್ಲಿ ತಾನು ಬದುಕಲಾರೆನೆಂಬ ಭಾವವನ್ನು ಮಾತ್ರ ತಡೆಯದೇ ಹೋದಳಂತೆ.
ಈಗ ಇನ್ನೊಬ್ಬಳ ಕಥೆ ನೋಡೋಣ. ಇವಳ ಗಂಡ ಊರಿಗೆ ಹೊರಟಿದ್ದಾನೆ. ಅವನು ವ್ಯಾಪಾರಕ್ಕೆ ಹೊರಟಿರುವ ಊರೋ ನೂರು ದಿನದ ಪ್ರಯಾಣ. ಆದರೆ, ಈ ಹೆಣ್ಣು ಎಷ್ಟು ಮುಗ್ಧಳೆಂದರೆ, ಅವನನ್ನು ನೀನು ಬರುವುದು ಯಾವಾಗ? ಮಧ್ಯಾಹ್ನವಾಗುವುದೇ? ಸಂಜೆಯಾಗುವುದೇ? ಎಂದು ಕೇಳುತ್ತಿರುವುದು ಎಂತಹ ವಿಪರ್ಯಾಸ ?
ಗಂಟೆಹೊಡೆಯುವ ಮುನ್ನವೋ ನಡುಹಗಲಲೋ ತುಸುಬಳಿಕವೋ
ಅಲ್ಲದಿರಲಿಳಿಹೊತ್ತಿಗಲ್ಲವೆ ಇನಿಯ ನೀ ಬರುವುದೆನುತ
ನೂರು ದಿನಗಳ ದೂರ ಪಯಣಕೆ ಹೊರಟುನಿಂತಿಹ ನಲ್ಲನ
ಗಮನ ತಪ್ಪಿಸುತಿಹಳು ಹುಡುಗಿಯು ಬಿಕ್ಕುತಲಿ ಕಂಬನಿಯಲಿ
ಸಂಸ್ಕೃತ ಮೂಲ:
ಪ್ರಹರವಿರತೌ ಮಧ್ಯೇ ವಾಹನಸ್ತತೋsಪಿ ಪರೇsತಥಾ
ಕಿಮುತ ಸಕಲೇ ಜಾತೇ ವಾಹ್ನಿಪ್ರಿಯ ತ್ವಮಿಷೈಹ್ಯಸಿ
ಇತಿ ದಿನಶತಪ್ರಾಪ್ಯಂ ದೇಶಂ ಪ್ರಿಯಸ್ಯ ಯಿಯಾಸತೋ
ಹರತಿ ಗಮನಂ ಬಾಲಾಲಾಪೈಃ ಸಬಾಷ್ಪಗಲಜ್ಜಲೈಃ
ಈ ಮೇಲಿನ ನಾಲ್ಕೂ ಪದ್ಯಗಳಲ್ಲಿ ಬರೀ ಹೆಣ್ಣಿನ ಬೇಗೆಯಷ್ಟೇ ಚಿತ್ರಣವಾಗಿದೆ. ಹಾಗಿದ್ದರೆ, ವಿರಹವೆನ್ನುವುದು ಕೇವಲ ಹೆಣ್ಣಿಗೆ ಮಾತ್ರವೇ ಉಂಟೇ? ಪ್ರೀತಿ ಹೆಣ್ಣಿಗೂ ಗಂಡಿಗೂ ಇರುವಾಗ ವಿರಹದ ಚಿತ್ರವನ್ನು ಗಂಡಿನ ಬಗ್ಗೆ ಯಾಕೆ ಕೊಡಬಾರದು ಎಂದಿರಾ? ಅಮರುಕ ಈ ಚಿತ್ರಣವನ್ನೂ ಕೊಟ್ಟಿದ್ದಾನೆ!
ಈ ಪದ್ಯದ ನಾಯಕ ಒಬ್ಬ ವ್ಯಾಪಾರಿ. ನೂರಾರು ಹೊಳೆ ಕಾಡುಗಳನ್ನು ದಾಟಿ ದೂರದೇಶದಲ್ಲಿರುವ ಹಾದಿಗ. ಆದರೂ, ತನ್ನ ನಲ್ಲೆಯ ನೆನಪಲ್ಲೇ , ತನ್ನ ಊರಿನ ಕಡೆಯೇ ತಿರುಗಿ ತಿರುಗಿ ನೋಡುತ್ತಿದ್ದಾನಂತೆ.
(ಚಿತ್ರ: ಅಜಂತಾದ ಹತ್ತನೇ ಗುಹೆಯೊಂದರ ಭಿತ್ತಿ ಚಿತ್ರ. ಛಾಯಾಗ್ರಾಹಕ: ಪ್ರಸಾದ್ ಪವಾರ್)
ದೂರದೇಶದಿ ಕಾಡುಮಲೆಹೊಳೆನೂರು ದಾಟಿಹ ದಾರಿಗ
ತನ್ನ ದಿಟ್ಟಿಗೆ ನಲ್ಲೆ ನಿಲುಕಳು ಎಂಬುದನು ತಾನರಿತರೂ
ಕೊರಳ ನಿಲುಕಿಸಿ ಮೆಟ್ಟುಗಾಲಲಿ ನೀರು ತುಂಬಿದ ಕಣ್ಣಲಿ
ಏನನೋ ನೆನೆಯುತ್ತಲಾಕಡೆಯಲ್ಲೆ ನೋಡುತಲಿರುವನು !
ಸಂಸ್ಕೃತ ಮೂಲ:
ದೇಶೈರಂತರಿತಾ ಶತೈಶ್ಚ ಸರಿತಾಮುರ್ವೀಭೃತಾಂ ಕಾನನೈಃ
ಯತ್ನೇನಾಪಿ ನ ಯಾತಿ ಲೋಚನಪಥಂ ಕಾಂತೇತಿ ಜಾನನ್ನಪಿ |
ಉದ್ಗ್ರೀವಶ್ಚರಣಾರ್ಧರುದ್ಧವಸುಧಃ ಕೃತ್ಚಾಶ್ರುಪೂರ್ಣಂ ದೃಶಂ
ತಾಮಾಶಾಂ ಪಥಿಕಸ್ತಥಾಪಿ ಕಿಮಪಿಧ್ಯಾಯಶ್ಚಿರಂ ವೀಕ್ಷತೇ ||
ಹೀಗೆ ಅಮರುಕನು ಪ್ರತಿಪಾದಿಸಿರುವ ಪ್ರೇಮಿಗಳ ನಡುವೆ ಅಭಿನ್ನತೆಯೂ, ಆದಿಶಂಕರರು ಪ್ರತಿಪಾದಿಸಿದ ಜೀವಾತ್ಮ ಪರಮಾತ್ಮರ ನಡುವೆ ಅದ್ವೈತವೂ, ಒಂದೇ ರೀತಿಯೆನಿಸಿ ಶಂಕರಾಚಾರ್ಯರೇ ಅಮರುಕನ ದೇಹದಲ್ಲಿ ಪರಕಾಯ ಪ್ರವೇಶ ಮಾಡಿದನೆಂಬ ಕಥೆಗಳು ಹುಟ್ಟಿಕೊಂಡಿರಬಹುದೇನೋ ಎನ್ನಿಸದಿರದು.
-ನೀಲಾಂಜನ
(೨೦೧೫ ರ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ ವಾರ್ಷಿಕ ಸಾಹಿತ್ಯ ಸಂಚಿಕೆ – ಸ್ವರ್ಣಸೇತು ವಿನಲ್ಲಿ ಪ್ರಕಟವಾದ ಬರಹ )
April 24th, 2014 marks the 450th birth anniversary of William Shakespeare.
Just thought of sharing some pictures from Stratford-upon-Avon. A timely tit-bit here – Avon, in old Welsh just meant “river”. So there are several Avons in England – and similarly there are several towns named Stratford. Shakespeare’s Stratford is on the banks of a river, and that’s how it ended up being called “Stratford-upon-Avon”.
Stratford, Main Street:
Is Shakespeare still alive? A street performer:
The main attraction at Stratford, obviously is the well preserved house where Shakespeare lived. It’s been converted to a very busy tourist place.
Side view of Shakespeare’s house:
Inside one of the rooms of the house:
Shakespeare’s father was a rich tanner by profession and was a rich man. Some leather in process, to bring back those times:
Inside one of the bedrooms:
How can you exit a “touristy” place, without entering the Gift Shop 🙂 ?
William Shakespeare
-neelanjana
p.s:How I wish we had similar memorials to artists and poets in India! Unfortunately we don’t seem to copy the good things from the West. For an example of how we have messed up, read here, and here.
In my post a few months ago, I had written about why Indus Valley Civilization be better termed as Saraswathi-Sindhu Civilization, and it’s relation with the people who composed the Vedas.
Recently, I listened to a lecture of Dr R Ganesh on the topic of the Myth of Aryan Invasion – A myth that was the brainchild of colonialists of the 19th century to best suit their beliefs of those times – but unfortunately carried down even to this day, when all the scientific evidence shows otherwise.
This lecture was held at Rasadhwani Kalakendra, Benagluru, and I thank the organizers for agreeing to share the recording. The lecture is in Kannada and runs for about two hours.
Here is a link to to download the lecture for your listening pleasure. : The Myth of the Aryan Invasion of India by Shataavadhani Dr R Ganesh
If you have Google Chrome Apps such as DriveTunes or TwistedWave, you can listen to the lecture online as well from the same link.
You can get in touch with the people at Rasadhwani Kalakendra at rasadhwani.kalakendra@gmail.com, or by going to their Facebook page (https://www.facebook.com/rasadhwani.kalakendra) for information about their future
events and lectures.
Here is a video link for the lecture:
-neelanjana
ಕ್ಷೇಮಪುರದಲಿ ಇದ್ದನೊಬ್ಬನು ಶ್ರೀನಿವಾಸನ ನಾಮದಿ
ಹೇಮದಾಭರಣಗಳ ಮಾಡುತ ಮಾರಿ ಗಳಿಸುತ ನೆಮ್ಮದಿ
ನಾಮಮಾತ್ರಕು ದಾನವೆಂಬುದನಾತ ಸ್ವಲ್ಪವು ನೀಡದೆ
ನೇಮದಿಂದಲಿ ದುಡ್ಡುಮಾಡುವ ದಾರಿಯೊಂದನೆ ಕಂಡನು || ೧||
ಶ್ರೀನಿವಾಸನು ಸತ್ಯದಲಿ ಬೇರೆಲ್ಲ ವಿಷಯದಿ ಯೋಗ್ಯನು ||
ಗಾನವಿದ್ಯೆಯ ಪದ್ಧತಿಯಲಿ ಸಮಾನರಾರನು ಕಾಣೆನು
ಸಾನುರಾಗದಿ ಚಿಣ್ಣರಿಗೆ ಸಂಗೀತವಿದ್ಯೆಯ ಪೇಳ್ವನು
ಕಾನುಮಲೆಯ ಕ್ಷೇಮಪುರದಲ್ಲವನೆ ಬಲುಸಿರಿವಂತನು ||೨||
ಶ್ರೀನಿವಾಸನ ಮಡದಿ ಸರಸತಿ ಸಾಧ್ವಿಯವಳು ನಿಚ್ಚದಿ
ಮಾನಿನಿಯು ತಾನೆಂದು ಗಂಡನ ಮಾತ ಮೀರಲು ಹೋಗಳು
ತಾನು ಮಾಡಿದ ಭಾಗ್ಯ ತನ್ನಯ ಗಂಡ ಮಕ್ಕಳ ಕಾವುದು
ಏನೊ ಎಂತೋ ದೈವ ನೀಡಿದುದಲ್ಲೆ ಶಾಂತಿಯ ಕಾಂಬಳು ||೩||
ಒಂದು ಶ್ರಾವಣ ತಂಪು ಹಗಲಲಿ ಶ್ರೀನಿವಾಸನ ಮಳಿಗೆಗೆ
ಬಂದು ನಿಂತನು ವೃದ್ಧ ಬ್ರಾಹ್ಮಣನೊಬ್ಬ ಬೇಡುತ ಹಣವನು
ಕಂದ ಮೊಮ್ಮೊಗನಿಹನು ಮನೆಯಲಿ ಮಾಡಬೇಕಿದೆ ಮುಂಜಿಯ
ಒಂದು ಹೊನ್ನನು ಕೊಟ್ಟರಾಯಿತು ಧನ್ಯನಾಗುವೆ ಎಂದನು ||೪||
ಎಂದು ದಾನವ ಮಾಡದಂತಹ ಶ್ರೀನಿವಾಸನು ಯೋಚಿಸಿ
ಇಂದು ಈತನ ಸಾಗಿಹಾಕಿದರಾಯಿತೆನ್ನುತ ಭಾವಿಸಿ
ಮುಂದೆ ಬಾಗಿಲಿನಿಂದ ಆಚೆಯೆ ವೃದ್ಧನಾತನ ಕಳುಹಿಸಿ
ಬಂದು ನೋಡೆಲೆ ವಾರವಾಗಲಿ ಆಗ ಕೊಡಬಹುದೆಂದನು ||೫||
ಹೀಗೆ ವಾರವು ಮತ್ತೆ ವಾರವು ತಿಂಗಳುಗಳೇ ಸಂದವು
ಯೋಗಿಯಂದದಿ ಮುದುಕ ಹಾರುವ ಬೇಸರಿಲ್ಲದೆ ಬರುವನು
ಬಾಗಿ ನಿಲ್ಲುವ ಮತ್ತೆ ಬೇಡುತ ಒಂದು ಹೊನ್ನಿನ ಕಾಸನು
ರೇಗು ಹತ್ತಿದ ಶ್ರೀನಿವಾಸನು ಕಿಲುಬು ನಾಣ್ಯವ ಕೊಟ್ಟನು ||೬||
ಕೆಟ್ಟ ನಾಣ್ಯವ ಕೊಟ್ಟರೂ ಅವ ಕೈಯ ಮುಗಿಯುತ ಹೊರಟನು
ಕೆಟ್ಟು ಹೋಗಿರೆ ಹಣೆಯ ಬರಹವು ಹೊಣೆಯು ಯಾರದಕೆಂದನು
ಪಟ್ಟು ಬಿಡದಿರುವುದೊಳಿತೆಂದವ ಮನದಿ ಯೋಚನೆ ಮಾಡುತ
ನೆಟ್ಟ ನೇರದಿ ಹೋಗಿ ಸರಸತಿ ಮನೆಯ ಬಾಗಿಲ ಬಡಿದನು ||೭||
ತಂದೆಯಂತಿಹ ಮುದುಕ ಹೇಳಿದ ಕಥೆಯ ಸರಸತಿ ಕೇಳಿ ತಾ
ನೊಂದು ನವೆಯುತ ಏನ ತಾನೇ ಮಾಡಬಲ್ಲೇನೆಂದಿರೆ
ತಂದೆ ತಾಯಿಯು ಕೊಟ್ಟ ಮುತ್ತಿನ ನತ್ತು ನೆನಪಿಗೆ ಬಂದಿತು
ಚೆಂದವಾಗಿರುವೊಡವೆಯೊಂದಿದೆ ಕೊಳ್ಳಿರೀಗಲೆ ಎಂದಳು ||೮||
ತರುಣಿ ಕೊಟ್ಟಿಹ ಹೊಳೆವ ಮೂಗುತಿ ನೋಡಿ ಹಿಗ್ಗಿದ ಬ್ರಾಹ್ಮಣ
ಸಿರಿನಿವಾಸನ ಬಳಿಗೆ ವೇಗದಿ ಧಾವಿಸುತ್ತಲೆ ಹೋದನು
ಇರುಳ ದೀಪದ ಸೊಬಗಿನಾಮುತ್ತಿಹುದು ನನ್ನಲಿ ನೋಡಿರಿ
ಸರಿಯ ಬೆಲೆಯನು ನೀವೆ ಕಟ್ಟಿರಿ ಹಣವ ನೀಡಿರಿ ಎಂದನು ||೯||
ಹೊಳೆವ ಮೂಗುತಿ ಸೊಬಗ ಕಂಡು ಶಂಕೆಗೊಂಡನು ನಾಯಕ
ಬೆಳಕಿನಾ ಖನಿಯಿದನು ಕಂಡಿಹೆ ಮೊದಲೆ ತಾನೆಂದೆನಿಸಲು
ಹೊಳೆಯಿತವನಿಗೆ ಮಡದಿ ಸರಸತಿ ಹಾಕಿಕೊಳ್ಳುವ ಮೂಗುತಿ
ಸೆಳೆದು ತಂದಿಹನೇನೊ ಎನ್ನುವ ಭಯವು ಕಾಡಿತು ಮನಸಲಿ ||೧೦||
ಮಡದಿ ಸರಸತಿ ಏನು ಮಾಡಿದಳೆಂದು ಅರಿಯುವ ಕಾರಣ
ಒಡನೆ ಎದ್ದು ಹೊರಟ ಮನೆಕಡೆ ಶ್ರೀನಿವಾಸ ನಾಯಕ
ಕೊಡುವೆ ಹಣವನು ಹೊರಗೆ ಕುಳ್ಳಿರು ಬೇಗ ಮರಳುವೆ ಎನ್ನುತ
ಹಿಡಿದ ನತ್ತನು ಪೆಟ್ಟಿಗೆಯಲೇ ಇಟ್ಟು ಬೀಗವ ಹಾಕಿದ || ೧೧||
ಮಳಿಗೆ ಹಿಂದಿನ ಕೋಣೆಯಲ್ಲಿ ಇದ್ದ ಬಾಲಕ ಮಧ್ವಪ
ಕುಳಿತು ಚಿತ್ರವ ಬಿಡಿಸುತಿದ್ದವ ಅಪ್ಪ ಹೋದುದ ಕಾಣುತ
ಒಳಗಿನಿಂದ ಹೊರಗೆ ಬಂದು ನೋಡಿ ಮುಚ್ಚಿದ ಪೆಟ್ಟಿಗೆ
ಒಳಗೆ ನೋಡುವೆನೆಂದು ಬೀಗವ ತೆರೆಯೆ ಮೂಗುತಿ ಕಂಡಿತು ||೧೨||
ಅರರೆ ಅಮ್ಮನ ಮೂಗುತಿಯಿದು ಇಲ್ಲಿಗೇತಕೆ ಬಂದಿತು?
ಮುರಿದು ಹೋದುದೆ? ಸರಿಗೆ ಕಡಿದುದೆ? ಇಲ್ಲ ಬಣ್ಣವು ಕೆಟ್ಟುದೆ?
ಇರುವ ವಿಷಯವದೇನೋ ತಿಳಿಯದು ಮುದುಕನೇನಿದ ತಂದನು?
ಸರಿಯಿದನ್ನು ನೋಡಿ ತಂದೆಯದೇಕೆ ಮನೆಕಡೆ ನಡೆದನು? ||೧೩||
ಅತ್ತ ನಾಯಕ ಮನೆಗೆ ಹೋಗಿ ಬಳಿಗೆ ಮಡದಿಯ ಕರೆಯುತ
ಮುತ್ತು ಮೂಗುತಿ ಕಾಣದೆಲ್ಲಿಗೆ ಹೋಯಿತೆನ್ನುತ ಕೇಳಲು
ಎತ್ತಿ ಇಟ್ಟಿಹೆ ತಂದು ತೋರುವೆನೆಂದು ನುಡಿದೊಳಹೋದಳು;
ಇತ್ತ ಕಡೆಯಲಿ ಬಾಲಕನು ಭಯದಿಂದ ಮನೆಗೋಡುತಲಿರ್ದನು ||೧೪ ||
ನುಡಿದೆ ಹುಸಿಯನು ಗಂಡನಲಿ ನಾನೆಂತು ಮೂಗುತಿ ತೋರಲಿ?
ಬಿಡದೆ ನಿನ್ನಯ ಪಾದವೆಂದಿಗು ನಂಬಿದವಳನು ಪಾಲಿಸೋ
ಕಡುಪರೀಕ್ಷೆಯ ಸಮಯ ಬಂದಿದೆ ನೀನೆ ದಾರಿಯ ತೋರ್ವುದು
ಎಡದ ಹೂವಲಿ ಪ್ರಾಣ ನೀಗುವೆ ಬಲದಿ ಕೊಟ್ಟರೆ ಬಾಳುವೆ ||೧೫||
ಹೀಗೆ ನೆನೆಯುತ ಸರಸತಿಯು ತಾ ಹೂವನಿಟ್ಟಳು ವಿಠಲಗೆ
ಬೇಗ ಬಾರೆನ್ನುತಲಿ ಹೊರಗಡೆ ಪತಿಯು ಕೂಗುತಲಿದ್ದಿರೆ
ಆಗಬಾರದುದೇನೊ ನಡೆಯುವ ಭಯವು ಹೆಚ್ಚುತ ಹೋಗುತ
ಹೇಗೊ ದಾರಿಯ ಓಡಿ ಮುಗಿಸಿದ ಹುಡುಗ ಮನೆಬಳಿ ಬಂದನು ||೧೬||
ಹೊರಗಡೆಯಲೇ ಅಪ್ಪ ನಿಂತಿಹ ಮುಖದಲೇನೋ ಕೋಪವು
ಮರುಳುಗೆಟ್ಟನೊ? ಕನಸ ಕಂಡನೊ? ಏಕೆ ಈಪರಿ ನೋಟವು?
ಇರಲಿ ಮೊದಲಿಗೆ ತಾಯ ಕಾಣುವೆ ಮತ್ತೆ ಮೂಗುತಿ ನೀಡುವೆ
ಸರಸರನೆ ಹೀಗೆನಿಸಿ ಮಧ್ವಪ ಮನೆಯ ಪಕ್ಕದಿ ಓಡಿದ ||೧೭||
ಮುಚ್ಚಿರುವಕಂಗಳನು ಸರಸತಿ ಕೈಯ ಮುಗಿದೇ ತೆರೆಯಲು
ನಿಚ್ಚದಲಿ ಬಿದ್ದಿತ್ತು ಎಡಗಡೆಯಿಂದಲೊಂದು ಕುಸುಮವು
ಅಚ್ಚಕೆಂಪನೆ ಹೂವದನ್ನು ನೋಡಿ ಕಸಿವಿಸಿಗೊಳ್ಳುತ
ಪಚ್ಚೆವಜ್ರದ ಕಿವಿಯ ಓಲೆಯ ತೆಗೆದು ಪುಡಿಪುಡಿಗೈದಳು ||೧೮||
ಹಿಂದುಗಡೆಯಲಿ ಓಡುವಾಗಲೆ ಕಿಟಕಿಯಲ್ಲೇ ಕಂಡಿತು
ಮಂಗಳದ ಕುರುಹಲ್ಲ ತಾಯಿಯ ಕಣ್ಣ ತುಂಬಿದ ಹನಿಗಳು
ನುಂಗಹೊರಟಿಹಳೇನೊ ಕಾಣದು ಬಾಲಕನು ಭಯಗೊಳ್ಳುತ
ಮುಂದಕೇನೂ ತೋರದೇ ಅವ ನತ್ತು ಕಿಟಕಿಯೊಳೆಸೆದನು ||೧೯||
ಕಣ್ಣ ಮುಚ್ಚಿ ವಿಷವ ಸೇವಿಸ ಹೊರಟ ಸರಸತಿ ಬೆಚ್ಚುತ
ಕಣ್ಣ ಬಿಟ್ಟಳು ಏನೋ ಬಿದ್ದಿರಲಾಗ ಕೈಯಲಿ ಒಮ್ಮೆಗೆ
ಕಣ್ಣನೇ ತಾ ನಂಬಲಾರಳು ಕೈಯಲಿರುವುದು ಮೂಗುತಿ
ಬಣ್ಣಗೆಟ್ಟಿಹ ಅವಳ ಮೊಗದಲಿ ಮತ್ತೆ ಮರಳಿತು ಜೀವವು || ೨೦||
ಏನು ಯೋಚಿಸದೇನೆ ಸರಸತಿ ಹೋಗಿ ಹೊರಗಡೆ ಗಂಡಗೆ
ತಾನು ಕೈಯಲಿ ಹಿಡಿದ ಮೂಗುತಿ ಮಾತನಾಡದೆ ಕೊಟ್ಟಳು
ಏನಿಹುದವಳೆಡಗೈಲಿ ಬಟ್ಟಲು ಕಿವಿಯ ವಜ್ರವು ಕಾಣದೇ
ತಾನೆ ವಿಷಯವ ಅರಿತು ಬಟ್ಟಲ ವಿಷವ ನೆಲದಲಿ ಚೆಲ್ಲಿದ ||೨೧||
ನಡೆದ ನಾಯಕ ಅದೇ ನಿಮಿಷದಿ ಬೇಗ ತನ್ನಯ ಮಳಿಗೆಗೆ
ಅಡಗಿ ಹೋಗಿತ್ತವನ ಮನದಲಿ ಬೀಡು ಬಿಟ್ಟಿಹ ಕೃಪಣತೆ
ಉಡುಗಿ ಹೋಗುವುದಿತ್ತು ಒಂದೂ ತಪ್ಪುಮಾಡದ ಜೀವವು!
ಮಡದಿಗಿಂತಲು ಮಿಗಿಲು ಆಪುದೆ ಬರಿಯ ಧನಕನಕಾದಿಯು? ||೨೨||
ಶ್ರೀನಿವಾಸನು ಕಾಣಲಿಲ್ಲ ಅಂಗಡಿಯಲಿ ಮುದುಕನ
ಏನುಮಾಡಲು ಬೇಕು ಎಂಬುದನಾಗ ಮನದಲಿ ಯೋಚಿಸಿ
ತಾನೆ ಕೂಡಲೆ ಮಾಡಿಬಿಟ್ಟನು ಹಿರಿಯದೊಂದು ಮುಡಿವನು
ದಾನ ಮಾಡುವೆ ದಾಸನಾಗುವೆ ವಿಜಯನಗರವ ಸೇರುವೆ ||೨೩||
ಮನೆಗೆ ಮರಳಿದ ಶ್ರೀನಿವಾಸನು ಮುಡಿವ ಮಡದಿಗೆ ಹೇಳಿದ
ತನಗೆ ಭಾಗ್ಯವದಾಯಿತೆನ್ನುತ ಸರಸತಿಯು ಮರು ನುಡಿದಳು
ಜನವ ಕರೆಯುತ ಸಕಲ ಸಿರಿಯನು ಅಲ್ಲೆ ದಾನವ ಮಾಡುತ
ಮನೆಮಠಗಳನು ತೊರೆದು ಹೆಂಡತಿ ಮಕ್ಕಳೊಟ್ಟಿಗೆ ಹೊರಟರು ||೨೪||
ಹೋದ ದಿನಗಳ ಮರೆತು ಬಿಟ್ಟರು ಮತ್ತೆ ದಂಡಿಗೆ* ಹಿಡಿದರು
ವೇದ ವೇದ್ಯನ ಭಾವ ಗಮ್ಯನ ನಾಮ ಸಾಸಿರ ನುಡಿಯುತ
ಆದರದಿ ದಾಸನೆನಿಸುತ್ತಲಿ ಪುರಂದರನಾ ಹೆಸರಲಿ
ಆದುದೆಲ್ಲಾ ಒಳಿತೆ* ಎನ್ನುತ ರಾಮಕ್ರಿಯೆ*ಯಲಿ ಪಾಡುತ || ೨೫||
-neelanjana
*******************************************
p.s: This is the verse form of a story I wrote about Purandara Dasa’s transformation becoming a Haridasa from his previous life as a merchant. If you are interested in reading it in prose form, the story can be read here in Kannada or here, in English
p.p.s: It is written in the form of a choupadi – a four liner meter, which has been very successfully used in Kannada for story telling. The unforgettable “Govina Hadu” comes to mind. In the form that I have chosen, each line confirms to 3/4/3/4/3/4/4(5) mAtres
p.p.p.s: The first stanza refers to the town where Purandaradasa (or Srinivasa Nayaka, before he became a Haridasa hail) came from. Kshemapura, in the Sharavati valley is identified as the most likely place where he would have spent his life as a businessman. The last stanza refers to a composition of Purandara Dasa “Adaddella oLite Ayitu” that is supposedly an autobiographical, where he praises his wife as being instrumental in making him a Haridasa. This song is traditionally sung in rAga “Ramakriya” (now better known as Kamavardhini, and somewhat incorrectly as “Pantuvarali”
There is this old joke saying that when Neil Armstrong landed on the Moon in 1969, he was greeted by a malayali teashop owner holding a cup of tea for him. Those tea-stalls are an all-India phenomenon. Similarly, another universal phenomenon is that of Udupi hotels. It is hard to find a town without a Udupi hotel, particularly so in south India. But why did the folks from Udupi became famed for their restaurants? I can only contemplate. May be because Udupi is the town which Krishna calls his home! We all know how much Krishna loves food be it as fat-full as butter or as fat-free as avalakki (Remember Sudaama?) Anyway, whatever be the reason, Udupi hotels have become very popular in several states outside of Karnataka, particularly so in states such as Maharashtra and Tamil Nadu.
Udupi Krishna
Not only Udupi hotels have become very commonplace in Tamil Nadu, but they have also caught on a new meaning. They are used as a synonym to saying ‘vegetarian’. So if you see a board such as “Saravana Bhavan (udupi)”, it means it is a vegetarian restaurant, irrespective of whether the proprietor is from Andhra or Assam!
Outside India, hoteliers have marketed this Udupi name quite effectively to their advantage. There are many a restuarants called ‘Udupi -something’ or ‘Udupi-something-else’all the way from Washinton DC in the eastern coast to Seattle in the state of Washington on the west coast. I do not know how many of these are run by folks from Udupi. But one thing is certain. All these places are Udupi, just in name – not necessarily in taste. If you order a dOse, you will get a dOse which looks very authentic, but the reality literally seeps in as soon as you take a byte!
Oh, let me stop with this Udupi puraana, and think of Tirupati Timmappa! In here, there is a idli-dOse restaurant called ‘Tirupati Bheema’s’. We know Bheema for his abilities in the kitchen, but what in the world is Tirupati doing with Bheema and his kitchen? Till I came across this composition of Purandara Dasa, I was not aware of the relation between Tirupati and the restaurant industry.
Tirupati Venkateshwara
Here is that song – I have given it in dEvanAgari script:
धणिय नोडिदॆना वॆंकटन मनदणिये नोडिदॆना! ॥पल्लवि॥
धणिय नोडिदॆ शिखामणि तिरुमलना! ॥अनुपल्लवि॥
केसक्कि अन्न उंबुवना बड्डि
कासु बिडदे हॊन्न गळिसुवना!
दोसॆ अन्नव मारिसुवना तन्न
दासर म्याळदि कुणिदाडुतिहना! ॥1॥
बॆट्टदॊळगॆ इरुतिहन मन
मुट्टि भजिपरिगिष्टव सल्लिसुवना!
कॊट्ट वरव तप्पदवन
सृष्टिगधिक श्री पुरंदर विठलन! ॥2॥
Here is the meaning of the song:
pallavi: I saw him! Venkata, the Lord of Tirumala, My master!
anupallavi: I saw my Lord, the jewel in the crown to my heart’s content!
charaNa 1: (I saw him) who relishes ‘kEsakki’ (a variety of rice?) , who earns money with interest, who gets dOse, and other food items sold, and who participates joyously with the dancing haridAsas
charaNa 2: ( I saw him) who resides in the hill, and him who gives whatever wished for to those who are his true believers, him who stays true to his word, Purandara Vithala, who is the greatest in this creation
Because this song mentions Tirumala on the hills as the home of Purandara Vithala, we can be very certain that this was written about the deity at Tirupati. Don’t we all know the story of Srinivas Kalyana, that tells us that Tirupati Timmappa is still earning money to repay the interest for the loan he took from Kubera for his wedding.
The key phrase here is ‘dOse annava mArisuvana’; the Lord of Tirumala is credited to having had places where eatables like dOse, and rice were sold. This tells that there were restaurants in Tirupati almost 500 years ago ( Purandara’s time frame) where travelers could buy food. Of course, we know about dharma shaales that provided food and water to the travelers free, but this reference is not to such establishments. These are actually places that made selling food a businesses.
It is not for nothing that it is said that literature is a mirror of the society. But shh….! Don’t tell anyone. Because, now places such as Udupi Hotels, and Bengalooru ayyangar bakeries exist at least namesake. Otherwise, they might start thinking of changing their name to Tirupati!
-neelanjana
image courtesy: Google images
(Translated from a Kannada article I had written a while ago. You can read the original article here: ತಿರುಪತಿ ತಿಮ್ಮಪ್ಪನೂ ಉಡುಪಿಯ ಹೋಟೆಲೂ …
)
ಇತ್ತೀಚಿನ ಟಿಪ್ಪಣಿಗಳು