You are currently browsing the daily archive for ಸೆಪ್ಟೆಂಬರ್ 11, 2007.

This afternoon when I went out to run some errands, I had a glimpse of Lord Shiva walking on two feet :). Just kidding. But I did see a guy with a snake around his neck, walking his toddler in a stroller. The snake was a python, and not a cobra as always pictured in Shiva’s portraits. However, ನಾಗ (nAga) is a very overloaded word. So, nAga can mean a snake(generic), a cobra (specific), an elephant among a number things. In fact, most samskRuta words are quite overloaded. So, someone with a python around his neck qualifies to be called be ನಾಗಾಭರಣ (nAgAbharaNa)! So much for my sighting of Lord Shiva.

But this sighting made me recollect a very popular kannada song. The songs written by a muslim saint of the 19th century, shisunALa sharief, were brought back the circulation by N S Lakshminarayana Bhatta, a noted Kannada poet of our times. C Ashwath, who is a contemporary music director has made Sharief’s songs extremely popular all over Karnataka.

The song is hAvu tuLidEne, mAnini hAvu tuLidEne ( I stepped on a snake, oh damsel, I stepped on a snake). 

You can listen to the song on the following page.

http://www.udbhava.com/udbhava/songs.jsp?fav_id=1981&user=7528

(Haava Tulidena)

ಹಾವು ತುಳಿದೇನೆ ಮಾನಿನಿ
ಹಾವು ತುಳಿದೇನೆ

ಹಾವು ತುಳಿದು ಹಾರಿ ನಿಂತೆ
ಜೀವ ಕಳವಳಿಸಿತೇ ಗೆಳತಿ!
ದೇಹ ತ್ರಯದ ಸ್ಮೃತಿಯು ತಪ್ಪಿ
ದೇವಾ ನೀನೆ ಗತಿಯು ಎನ್ನುತ

ಹರಿಗೆ ಹಾಸಿಗೆಯಾದ ಹಾವು
ಹರನ ತೋಳಿನೊಳಿರುವ ಹಾವು
ಧರೆಯ ಹೊತ್ತು ಮೆರೆವ ಹಾವಿನ
ಶಿರವ ಮೆಟ್ಟಿದೆ ಶಿವನ ದಯದಿ

ಬೋದಾನಂದವಾಗಿ ಬರಲು
ಹಾದಿಯಲ್ಲಿ ಮಲಗಿ ಇರಲು
ಪಾದದಿಂದ ಪೊಡವಿಗೊತ್ತಿ
ನಾದಗೊಳಿಸಿತು ನಿಜದಿ ನೋಡೆ

ಸತ್ಯ ಶಿಶುವಿನಾಳಧೀಶನ
ನಿತ್ಯಸೇವಿಸುವಂಥ ಮಾನಿಗೆ
ಕತ್ತಲಲ್ಲಿ ಬಂದು ಕಾಲಿಗೆ
ಸುತ್ತಿಕೊಂಡಿತು ಸಣ್ಣ ನಾಗರ

Sharief is a mystic poet, and there is some kind of halo or haziness about his songs. They are not as easy to interpret like (most of) the works of haridAsas of Karnataka. So I would definitely not make an attempt to translate it here 😦 , at least for now!

One thing that makes it a favourite song of mine is because it’s classical music base. Most of Sharief’s songs have been tuned in a semi-folk style. This song although has a folkish face, underneath is set in a  very classical rAga of Karnataka Sangeetha – yadukula kAmbhOji, and mishra chApu tALa. This is not an anamoly as it might seem, because indeed the rAga yadukula kAmbhOji has folk roots . This rAga apparently has come from tunes sung by a tribal group called ‘erakala’.  Since the songs sung by these tribal singers resembled the ever popular kAmbhOji rAga, but yet different it was called erakala kAmbhOji – and over the centuries the rAga was ‘civilized’ if you want to call it that way 😉 to yadukula kAmbhOji.

To compare and contrast, here are couple of compositions in the same rAga:

listen to heccharikagA rArA srI rAmachandra  of tyAgarAja sung by M S Subbulakshmi.

listen to ikShvAku kulatilaka  of bhadrAchala rAmadAda, sung by Balamuralikrishna.

You can notice the folkish tinge even in the composition of bhadrAchala rAmadAsa too.

So much for sighting of nAgAbharaNa 🙂

-neelanjana

ಅಲ್ಲಿದೆ ನಮ್ಮ ಮನೆ, ಇಲ್ಲಿರುವುದು ಸುಮ್ಮನೆ!

ಕದಬಾಗಿಲಿರಿಸಿದ ಕಳ್ಳ ಮನೆಇದು
ಮುದದಿಂದಲೋಡ್ಯಾಡೋ ಸುಳ್ಳು ಮನೆ |
ಇದಿರಾಗಿ ವೈಕುಂಠವಾಸಮಾಡುವಂತ
ಪದುಮನಾಭನ ದಿವ್ಯ ಬದುಕುಮನೆ ||

ಮಾಳಿಗೆಮನೆಯೆಂದು ನೆಚ್ಚಿಕೆಡಲುಬೇಡ
ಕೇಳಯ್ಯ ಹರಿಕಥೆಶ್ರವಣಂಗಳ |
ನಾಳೆ ಯಮದೂತರು ಬಂದೆಳೆದೊಯ್ವಾಗ*
ಮಾಳಿಗೆ ಮನೆ ಸಂಗಡ ಬಾರದಯ್ಯ ||

ಮಡದಿಮಕ್ಕಳು ಎಂಬ ಹಂಬಲ ನಿನಗೇಕೋ
ಕಡುಗೊಬ್ಬುತನದಿ ನಡೆಯದಿರು |
ಒಡೆಯ ಶ್ರೀ ಪುರಂದರ ವಿಠಲನ ಚರಣವ
ದೃಢಭಕ್ತಿಯಲಿ ನೀ ನೆನೆಸಿಕೊ ಮನುಜ ||

ಚಿಕ್ಕಂದಿನಿಂದ ದೇವರನಾಮಗಳನ್ನು ಕೇಳುತ್ತಲೆ ಬೆಳೆದವನು ನಾನು. ಅಮ್ಮ ನನಗೆ ನೆನಪಿದ್ದಂತೆ, ಬೆಳಗ್ಗೆದ್ದಾಗಿನಿಂದ, ನಮ್ಮನ್ನು ಶಾಲೆಗೆ ಕಳಿಸುವವರೆಗೂ ಒಂದೆಡೆ ಕೆಲಸ ಮಾಡುತ್ತ, ಇತ್ತಕಡೆ ಹಾಡುತ್ತಲೇ ಇರುತ್ತಿದ್ದರು. ಇನ್ನೂ ಮನೆಯ ಅಡುಗೆ ಕೆಲಸ ಇತ್ಯಾದಿ ಎಲ್ಲ ಮುಗಿಯುವವರೆಗೆ ಅವರ ಹಾಡುಗಳು ಮುಂದುವರೆಯುತ್ತಿದ್ದವು. ಅವರ ಅಮ್ಮ, ಅಂದರೆ ನನ್ನ ಅಜ್ಜಿಯಂತೂ ಬೆಳಗಿನಿಂದ ಸಂಜೆಯವರೆಗೂ ಹೀಗೇ ಹಾಡುತ್ತಿದ್ದರಂತೆ. ಆದರೆ, ನನಗೆ ನೆನಪಿರುವ ಹೊತ್ತಿಗೆ ಅವರಿಗೆ ಹಾಡಲು ಅಷ್ಟಾಗಿ ಆಗುತ್ತಿರಲಿಲ್ಲ. ಅದಿರಲಿ, ನಮ್ಮ ಮನೆಯಲ್ಲಿ ಬೆಂಗಳೂರು ಆಕಾಶವಾಣಿಯ ೮:೨೦ ರ ರೇಡಿಯೋ ಸಂಗೀತದ ಸಮಯದಲ್ಲಿ ಮಾತ್ರ ನಮ್ಮ ಅಮ್ಮನಿಗೆ ಹಾಡುವುದರಿಂದ ವಿಶ್ರಾಂತಿ, ಮತ್ತು ರೇಡಿಯೋಕ್ಕೆ ಹಾಡುವ ಯೋಗ. ಅಮ್ಮನಿಗೆ ನೂರೋ ಇನ್ನೂರೋ ದೇವರನಾಮಗಳು ಬರುತ್ತವೆ. ಅಷ್ಟಲ್ಲದೇ, ಹೊಸದೊಂದು ಸಾಹಿತ್ಯ ಕಂಡರೆ, ಕೇಳಿದರೆ ತಕ್ಷಣ ಅದಕ್ಕೆ ಹೊಂದುವ ರಾಗ ಹಾಕಿ ಹಾಡುವುದು ಅವರಿಗೆ ಈಗಲೂ ಅವರಿಗೆ ಇಷ್ಟವಾದ ವಿಷಯ. ದೇವರನಾಮಗಳಿಗೆ, ಕೃತಿಗಳಷ್ಟು ಸಂಗತಿಗಳ ಬಂಧವಿಲ್ಲ – ಬೇರೆಕೆಲಸದಲ್ಲಿ ವ್ಯಸ್ತರಾಗಿದ್ದಾಗ ಹಾಡಲು ಅದೇ ಸಲೀಸು ಎಂದು ಅವರ ಎಣಿಕೆ ಎನಿಸುತ್ತೆ. ತ್ಯಾಗರಾಜರ, ದೀಕ್ಷಿತರ ಕೃತಿಗಳಾದರೆ ತಂಬೂರಿ ಮೀಟುತ್ತಾ ಕುಳಿತು ವಿಸ್ತರಿಸಿ ಹಾಡಿದರೆ ಚೆನ್ನ. ಅವು ಸುಂದರವಾದ ಆಕಾರದಲ್ಲಿ ಅರಳುವ ಗುಲಾಬಿಗಳಂತೆ. ಆದರೆ, ದೇವರನಾಮಗಳು ಸ್ವಭಾವಸುಂದರ ವಾದ ಮಲ್ಲಿಗೆ, ಸಂಪಿಗೆಗಳಂತೆ. ಬಣ್ಣದಲ್ಲಿ ವೈವಿಧ್ಯವಿಲ್ಲದಿದ್ದರೂ, ಸುವಾಸನೆಯಲ್ಲಿ ಕೊರತೆ ಇಲ್ಲ. ನಾನು ನನಗೆ ಬರುವ ಹಾಡುಗಳನ್ನೂ ಹೀಗೆ ಅಮ್ಮ ಹಾಡುವಾಗ ಕೇಳಿ ಕೇಳಿ ಕಲಿತದ್ದೇ ಹೆಚ್ಚು.

ಅದಿರಲಿ – ಎಷ್ಟೋ ದಿನದಿಂದ ಈ ಬ್ಲಾಗ್ ಹೆಸರೂ ಇಲ್ಲದೆ ಖಾಲಿ ಬಿದ್ದಿತ್ತು. ಏನಾದರೊಂದು ಬರೆಯೋಣವೆಂದಾಗ ಇದ್ದಕ್ಕಿದ್ದಂತೆ ಈ ದೇವರನಾಮ ನೆನಪಾಯಿತು. ಸರಿ, ನನ್ನ ಬ್ಲಾಗಿಗೊಂದು ಚಂದವಾದ ಹೆಸರು ಸಿಕ್ಕಿತೆನ್ನಿಸಿತು.ಅದನ್ನೇ ಇಟ್ಟುಬಿಟ್ಟೆ!

ನಮ್ಮಲ್ಲಿ ಹೆಚ್ಚಿನವರು ಇಷ್ಟು ದೊರಕಿದರೆ ಮತ್ತಷ್ಟು ಬೇಕೆಂಬಾಸೆ, ಅಷ್ಟು ದೊರಕಿದರೆ, ಮತ್ತಿಷ್ಟರಾಸೆಯವರೇ. ಅದಕ್ಕೇ ಇರಬೇಕು – ಯಾವಾಗಲೂ ಮುನ್ನುಗ್ಗುವ ಓಟವೇ. ಆದರೆ, ನಿಜವಾಗಿ ನಮಗೆ ನಾವು ಬಯಸುವ ಆಸರೆ ಎಲ್ಲಾದರೂ ಸಿಗುತ್ತದೆಯೇ? ಮನಸ್ಸಿಗೆ ನೆಮ್ಮದಿ ಸಿಗಬೇಕಾದ್ದು ಒಳಗೋ ಹೊರಗೋ? ದೂರಬೆಟ್ಟದಲೊಂದು ಮನೆಯಿರಬೇಕು ಎಂದು ಬಯಸುವ ನಾವು, ಅಲ್ಲೇ ಮನೆ ಮಾಡಿದಾಗಲಾದರೂ ಸುಮ್ಮನಾಗುತ್ತೇವೆಯೇ? ಆಗಲೂ ಅಲ್ಲಿದೆ ನಮ್ಮಮನೆ, ಇಲ್ಲಿರುವುದು ಸುಮ್ಮನೆ ಎನ್ನಬಹುದೇ? ಕನಸಿನಲ್ಲಿ ಕಾಣುವ ನೋಟಗಳು ಕನಸಿನಲ್ಲಿ ಮಾತ್ರವೇ ಚೆನ್ನವೇ? ಪುರಂದರ ದಾಸರಂತಹ ವೈರಾಗ್ಯ ಎಲ್ಲರಿಗೂ ಸಾಧ್ಯವಿಲ್ಲವಲ್ಲ! ಹಾಗೇ, ಈ ಲೋಕದಲ್ಲಿ ಹೇಗೋ ಮುಂದೆ ನಡೆಯಬೇಕಾದ್ದರಿಂದಲೇ ಹೀಗೆ ಏನೇನಾದರೂ ಮನಸ್ಸಿಗೆ ಬಂದಂತೆ ಬರೆಯುತ್ತಿದೇನೆಯೇ ನಾನು? ನಾನು ಗಳಹುವುದನ್ನೂ ಯಾರಾದರೂ ಓದಬೇಕೆಂಬ ಆಸೆಯೇ? ಅಥವಾ ಇನ್ನೆಲ್ಲೋ ಸಾಧಿಸಲಾಗದ್ದನ್ನು, ಸಿಗದ ಹೆಮ್ಮೆಯನ್ನು, ಆರಸಿದ ನೆಮ್ಮದಿಯನ್ನು ಇನ್ನೆಲ್ಲೋ ಅರಸುವ ಚಟವೇ ಇದು? ಉತ್ತರ ಅಷ್ಟೇನೂ ಸುಲಭದ್ದಲ್ಲ. ಏಕೆಂದರೆ, ಈ ಪ್ರಪಂಚದಲ್ಲಿ ಬರೀ ಕಪ್ಪು-ಬಿಳುಪಲ್ಲದೆ ಮಧ್ಯದ ನೂರಾರು ವರ್ಣಛಾಯೆಗಳಿವೆಯಲ್ಲ!

ಅಂದಹಾಗೆ, ಚಿಕ್ಕವನಾಗಿದ್ದಾಗ ನಾನು ದಾಸರ ಪದಗಳು ಎನ್ನುವ ಹೆಸರಿಸುವಿಕೆಯನ್ನು ತಿಳಿದಿರಲಿಲ್ಲ. ದಾಸರು ಬರೆದದ್ದೆಲ್ಲ ನನಗೆ ದೇವರನಾಮವೇ. ನಂತರವೇ ಅದರಲ್ಲಿ ಪದ-ಸುಳಾದಿ-ಉಗಾಭೋಗ ಮೊದಲಾದ ವಿಧಗಳಿರುವುದು ತಿಳಿದದ್ದು ಎನ್ನಿ. ಈ ಮೊದಲು ಬರೆದ ಹಾಡು ಒಂದು ಪದ – ಈ ಹಾಡಿನ ಪಾರಮಾರ್ಥಿಕ ಅರ್ಥಗಳ ಬಹಳ ಆಳಕ್ಕೆ ಹೋಗದೆ ಹೋದರೂ, ಈ ದೇವರನಾಮ ನಮ್ಮ ಮನಸ್ಸಿಗೆ ಹೇಗೋ, ಹಾಗೇ ಇಂತಹ ಬ್ಲಾಗುಗಳಿಗೂ ಒಂದು ಕನ್ನಡಿ ಎನಿಸುತ್ತೆ ನನಗೆ. ಈ ಬ್ಲಾಗ್ ಎಂಬ ಮನೆಗಳಿಗೆ ನಾವು ಸುಮ್ಮನೆ ಬಂದಿರಬಹುದು. ಇದು ನಮ್ಮ ನೆಲೆ ಅಲ್ಲದಿರಬಹುದು. ಆದರೆ ಇದರಲ್ಲಿ ಮುದದಿಂದ ಓಡಾಡುವುದಂತೂ ಖಂಡಿತ! ಹೇಗೆ ಮನಸ್ಸಿನ ಮನೆಯಲ್ಲಿ ನಾವು ಪದುಮನಾಭನನ್ನು ನಿಲ್ಲಿಸಿಕೊಂಡು ನಿಜಮುಕ್ತಿಯನ್ನು ಪಡೆಯಬಹುದೋ, ಇಲ್ಲೂ ಅಂತೆಯೇ ನಮ್ಮ ಮನಸ್ಸಿಗೆ ಬೇಕಾದ ವಿಷಯಗಳನ್ನು ಮಾತಾಡುತ್ತ, ಕೆಲವನ್ನು ತಿಳಿದು, ಕೆಲವನ್ನು ತಿಳಿಸುತ್ತಾ ಮುಂದೆ ಹೋಗುತ್ತಿರಬಹುದಲ್ಲ?

ಈ ಕೊನೆಯ ಸಾಲನ್ನು ಬರೆಯುವಂತೆಯೇ ಇನ್ನೊಂದು ಸೊಗಸಾದ ದೇವರನಾಮ ನೆನಪಾಯಿತು – ಅದು ಇನ್ನೊಂದು ದಿನಕ್ಕಿರಲಿ! ಅತಿಪರಿಚಯಾತ್ ಅನಾದರಂ ಅಲ್ಲವೇ? ಒಟ್ಟಿಗೇ ಕೊಟ್ಟರೆ ಸಿಹಿಯೂ ಕಹಿಯಾದೀತು!

-ನೀಲಾಂಜನ

*ಸಾವಿರಾರು ಜನರನ್ನು ಯಮದೂತರು ಒಟ್ಟಿಗೇ ಕರೆದೊಯ್ದ ಈ ಸೆಪ್ಟೆಂಬರ್ ಹನ್ನೊಂದರ ದಿನ, ಈ ಜೀವನದ ನಶ್ವರತೆಯನ್ನು ಬಿಂಬಿಸುವ ಈ ಹಾಡು ನನಗೆ ನೆನಪಾದದ್ದು ಕಾಕತಾಳೀಯವೋ ನಾನರಿಯೆ. ಅಂದು ಸಲುಗಿದ ಸಾವಿರಾರು ಕುಟುಂಬಗಳು ಈಗಲಾದರೂ ಸ್ವಲ್ಪ ಸಮಾಧಾನವನ್ನು ಹೊಂದಲಿ ಎನ್ನುವುದು ನನ್ನ ಆಸೆ. ಸರ್ವೇ ಜನಾಃ ಸುಖಿನೋ ಭವಂತು.

Hits

  • 752,520

My book “Hamsanada” for iPad, iPhone or iPod

A Collection of  Samskrta Subhashitas, translated to Kannada

http://www.saarangamedia.com/product/hamsanada

My Book, on Google Play!

My Book Hamsanada, on Google Play

My Book Hamsanada, on Google Play

Enter your email address to follow this blog and receive notifications of new posts by email.

Join 9,609 other subscribers

ಅವಧಿಯಲ್ಲಿ ಹೀಗಂದರು:

"ಅಲ್ಲಿದೆ ನಮ್ಮ ಮನೆ…ಇಲ್ಲಿ ಬಂದೆ ಸುಮ್ಮನೆ… ಎಂಬ ಘೋಷ ವಾಕ್ಯದೊಂದಿಗೆ ಬ್ಲಾಗ್ ಮಂಡಲದಲ್ಲಿ ಕಾಣಿಸಿಕೊಂಡವರು ನೀಲಾಂಜನ. ಅಲ್ಲಿದೆ ನಮ್ಮ ಮನೆ ಕನ್ನಡದ ಪರಿಮಳವನ್ನು ಇಂಗ್ಲಿಷ್ ನಲ್ಲಿ ಹರಡುತ್ತಾ ಇದೆ. ಕನ್ನಡದ ವಚನಗಳು, ಸಂಸ್ಕೃತ ಸುಭಾಷಿತಗಳು ಜೊತೆಯಲ್ಲೇ ಸಂಗೀತ ಹೀಗೆ ಹಲವು ಲೋಕವನ್ನು ಈ ಬ್ಲಾಗ್ ಪರಿಚಯಿಸಿದೆ." ಅವಧಿ, ಮೇ ೧೫, ೨೦೦೮

ಇತ್ತೀಚಿನ ಟಿಪ್ಪಣಿಗಳು

Manjugouda police pa… ರಲ್ಲಿ Ugra Narasimha of Vijayan…
neelanjana ರಲ್ಲಿ Samasya Poornam – Part…
neelanjana ರಲ್ಲಿ Samasya Poornam – Part…
charukesha ರಲ್ಲಿ Where in the World is Mount…
ನೇಸರ್ ರಲ್ಲಿ Samasya Poornam – Part…
ಸೆಪ್ಟೆಂಬರ್ 2007
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 12
3456789
10111213141516
17181920212223
24252627282930

ಬಗೆ ಬಗೆ ಬರಹ

ಸಂಗ್ರಹಗಳು