You are currently browsing the daily archive for March 12, 2010.

“ತಿರುಪೆಯವನೆಲ್ಲಿ ಹೋದನೇ?”  “ಬಲಿಯ ಮನೇಗಿರ್ಬೇಕು ಕಣೇ!”
“ಪಶು ಪ್ರಾಣಿಗಳಿಗೊಡೆಯನೇ?”  “ಗೋಕುಲದಲ್ಲಿ ದನ ಕಾಯ್ತಾನೆ!”
“ಅಯ್ಯೋ ಪಾಪ,  ಹಾವೇ ಹಾರ!”  “ಸದಾ ಹಾವಿನ್ಮೇಲೆ ಮಲಗೋದಾ?”
“ಬಿಡು ಗೋಳು,  ತುಸು ನಗು”  “ಬದ್ಲಾಗಲಾರೆ ನಿನ್ನಂತೆ ಹೊತ್ತುಹೊತ್ತಿಗೂ!”
ಕಡಲಣುಗೆ ಲಕುಮಿಯೂ  ಮಲೆ ಮಗಳು ಗಿರಿಜೆಯೂ  ಹೀಗೆ ಸರಸದಲಿ
ಆಡುತಿಹ ಛೇಡಿಸುವ  ಕೀಟಲೆಯ  ಮಾತುಗಳೆ ಕಾಯಲೆಮ್ಮನ್ನು!

ಸಂಸ್ಕೃತ ಮೂಲ ಹೀಗಿದೆ:

भिक्षुः क्वास्ति बलेर्मखे पशुपतिः किं नास्त्यसौ गोकुले ।
मुग्धे पन्नगभूषणः सखि सदा शेते च तस्योपरि ।
आर्ये मुञ्च विषादमाशु कमले नाहं प्रकृत्या चला ।
चेत्थं वै गिरिजासमुद्रसुतयोः सम्भाषणं पातु वः ॥

-ನೀಲಾಂಜನ

Enter your email address to subscribe to this blog and receive notifications of new posts by email.

Join 592 other followers

ಅವಧಿಯಲ್ಲಿ ಹೀಗಂದರು:

"ಅಲ್ಲಿದೆ ನಮ್ಮ ಮನೆ…ಇಲ್ಲಿ ಬಂದೆ ಸುಮ್ಮನೆ… ಎಂಬ ಘೋಷ ವಾಕ್ಯದೊಂದಿಗೆ ಬ್ಲಾಗ್ ಮಂಡಲದಲ್ಲಿ ಕಾಣಿಸಿಕೊಂಡವರು ನೀಲಾಂಜನ. ಅಲ್ಲಿದೆ ನಮ್ಮ ಮನೆ ಕನ್ನಡದ ಪರಿಮಳವನ್ನು ಇಂಗ್ಲಿಷ್ ನಲ್ಲಿ ಹರಡುತ್ತಾ ಇದೆ. ಕನ್ನಡದ ವಚನಗಳು, ಸಂಸ್ಕೃತ ಸುಭಾಷಿತಗಳು ಜೊತೆಯಲ್ಲೇ ಸಂಗೀತ ಹೀಗೆ ಹಲವು ಲೋಕವನ್ನು ಈ ಬ್ಲಾಗ್ ಪರಿಚಯಿಸಿದೆ." ಅವಧಿ, ಮೇ ೧೫, ೨೦೦೮

 

March 2010
M T W T F S S
« Feb   Apr »
1234567
891011121314
15161718192021
22232425262728
293031  

ಬಗೆ ಬಗೆ ಬರಹ

Top Rated

Archives

Follow

Get every new post delivered to your Inbox.

Join 592 other followers