You are currently browsing the daily archive for September 17th, 2008.

ಜೀವನದಲ್ಲಿ ಕ್ಷೋಭೆಗಳಿಗೇನು ಕೊರತೆ? ಲೆಹ್ಮನ್ ಬ್ರದರ್ಸ್ ಇಂದ ಮಂಗಳೂರಿನಲ್ಲಿ ನಡೆದ ಗಲಾಟೆಯವರೆಗೆ, ಗುಸ್ತಾವ್, ಐಕ್ ನಿಂದ ಹಿಡಿದು  ಬೀಳುತ್ತಿರುವ ಶೇರು ಮಾರುಕಟ್ಟೆಯ ತನಕ ಬೇಕಾದಷ್ಟಿವೆ.

ಈಗ ತಾನೇ ಪುತಿನ ಅವರ ಶ್ರೀರಾಮ ಪಟ್ಟಾಭಿಷೇಕ ಗೀತನಾಟಕವನ್ನು ಓದಿ ಮುಗಿಸಿದೆ. ಅದರಲ್ಲಿ ಕಡೆಯಲ್ಲಿ ಬರುವ ಮಂಗಳ ಶ್ಲೋಕ (ಹೊಸತೇನಲ್ಲದಿದ್ದರೂ) ಹಿಡಿಸಿತು. ಅದನ್ನೇ ಇಲ್ಲಿ ಬರೆದಿರುವೆ.

ಕಾಲಕಾಲಕ್ಕೂ ಮೇಘ ವರ್ಷಿಸಲಿ
ಪೃಥಿವಿಯಾಗಲಿ ಸಸ್ಯಶಾಲಿನಿ
ಕ್ಷೋಭೆಗಳಿಲ್ಲದೆ ದೇಶ ಹದುಳಿರಲಿ
ಸಾಧುಗಭಯ, ಜಗಕೆಲ್ಲವು ಸಮ್ಮುದ

ಇದರ ಮೂಲ ಸುಮಾರು ಎಲ್ಲರಿಗೂ ತಿಳಿದದ್ದೇ ಆಗಿದೆ:

ಕಾಲೇ ವರ್ಷತು ಪರ್ಜನ್ಯ ಪೃಥಿವೀ ಸಸ್ಯಶಾಲಿನೀ|
ದೇಶೋSಯಂ ಕ್ಷೋಭರಹಿತಃ ಸಾಧವೋ ಸಂತು ನಿರ್ಭಯಾ:||

ಈ ಗೀತರೂಪಕವನ್ನು ಮೊನ್ನೆ ರಂಗದ ಮೇಲೆ ನೋಡಿದ ಮೇಲೆ ಇದನ್ನು ಕುಳಿತು ಓದಬೇಕೆಂದೆನಿಸಿ, ಓದಿದೆ. ಇನ್ನೊಂದಷ್ಟು ಬರೆಯಬೇಕು, ನೋಡೋಣ. ಎಂದಾಗುವುದೋ?

-ನೀಲಾಂಜನ

Email Subscription

Enter your email address to subscribe to this blog and receive notifications of new posts by email.

ಇಲ್ಲಿ ಬಂದು ಕಣ್ಣು ಹಾಯಿಸಿದವರು

free hit counter

planet ಕನ್ನಡ

ಪ್ಲಾನೆಟ್ ಕನ್ನಡ (Planet Kannada)

ಅವಧಿಯಲ್ಲಿ ಹೀಗಂದರು:

"ಅಲ್ಲಿದೆ ನಮ್ಮ ಮನೆ…ಇಲ್ಲಿ ಬಂದೆ ಸುಮ್ಮನೆ… ಎಂಬ ಘೋಷ ವಾಕ್ಯದೊಂದಿಗೆ ಬ್ಲಾಗ್ ಮಂಡಲದಲ್ಲಿ ಕಾಣಿಸಿಕೊಂಡವರು ನೀಲಾಂಜನ. ಅಲ್ಲಿದೆ ನಮ್ಮ ಮನೆ ಕನ್ನಡದ ಪರಿಮಳವನ್ನು ಇಂಗ್ಲಿಷ್ ನಲ್ಲಿ ಹರಡುತ್ತಾ ಇದೆ. ಕನ್ನಡದ ವಚನಗಳು, ಸಂಸ್ಕೃತ ಸುಭಾಷಿತಗಳು ಜೊತೆಯಲ್ಲೇ ಸಂಗೀತ ಹೀಗೆ ಹಲವು ಲೋಕವನ್ನು ಈ ಬ್ಲಾಗ್ ಪರಿಚಯಿಸಿದೆ." ಅವಧಿ, ಮೇ ೧೫, ೨೦೦೮

ಎಲ್ಲಿಂದ ಬಂದು ಕದವ ತಟ್ಟಿದರು?

Google Site Translator

 

September 2008
M T W T F S S
« Aug   Oct »
1234567
891011121314
15161718192021
22232425262728
2930  

ಬಗೆ ಬಗೆ ಬರಹ

Top Rated

Subscribe to RSS headline updates from:
Powered by FeedBurner